Tuesday, September 5, 2017

ಒಂದು ಸರಕಾರಿ ಪ್ರೌಢಶಾಲೆ ಕಥೆ....

ಎಲ್ಲ ಊರಂತೆ ನಮ್ಮ ಊರಲ್ಲೂ ಒಂದು ಸರಕಾರಿ ಪ್ರೌಢಶಾಲೆ  ಇದೆ, ಇಲ್ಲೂ ಅದೇ ಸರಕಾರಿ ಬಣ್ಣದ  ಕಟ್ಟಡಗಳು, ಡೆಸ್ಕಗಳು/ಬೆಂಚುಗಳು ,ಗಂಟೆಗಳು, ಸರಕಾರಿ ಪ್ರಾಧ್ಯಾಪಕರುಗಳು, ಬಡ ಕುಟುಂಬದಿಂದ ಬರುವ ಮಕ್ಕಳುಗಳು ಅದರೊಂದಿಗೆ ಹೆಸರಿಗೋಸ್ಕರ ಇರುವ SDMC( ಸ್ಕೂಲ್ ಡೆವೆಲಪ್  ಮಾನಿಟರಿಂಗ್ ಸಮಿತಿ) etc . ಇದು  ಹಳ್ಳಿ  ಹಳ್ಳಿಯ ಸರಕಾರಿ ಶಾಲೆಯ ಕಥೆ , ಇದರಲ್ಲೇನು ವಿಶೇಷ  ಅಂತೀರಾ ?

ನಾನು ಶಿಕ್ಷಣ ಪಡಿಯುವಾಗ ಮುಖ್ಯ ಉಪಾಧ್ಯಾಯನೆಂದರೆ ಆತ ಶಾಲೆಯಲ್ಲಿ ಹಿರಿಯ ಅಧ್ಯಾಪಕ ಮತ್ತು  ೧-೨ ವರ್ಷದಲ್ಲಿ ನಿವೃತ್ತಿ ಅಂಚಿನಲ್ಲಿ ಇರುತ್ತಿದ್ದರು. ಕಾಲ ಬದಲಾಗಿದೆ, ಏಕೆಂದರೆ  ಈ  ಶಾಲೆಗೇ ೬ ವರ್ಷದ ಮೊದಲು  ೨೬ ವರ್ಷದ ನ ಯುವಕನನ್ನು ಮುಖ್ಯ ಉಪಾಧ್ಯಾಯನಾಗಿ ನಮ್ಮ ಶಿಕ್ಷಣ ಇಲಾಖೆ ಯೋಜಿಸಿತು.  ಅವರನ್ನು ಮೊದಲು  ಭೇಟಿ ಮಾಡಿದಾಗ ಅವರು ಯಾವ ರೀತಿ ನಮ್ಮ  ಸರಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸಬಹುದು ವಿಚಾರವಾಗಿ ತುಂಬಾ ಕೂಲಂಕುಷ ಚರ್ಚೆ ಮಾಡಿದರು. ಅವರ ಕನಸಿನ ಸರಕಾರಿ ಶಾಲೆ ಯಾವುದೇ ಖಾಸಗಿ  ಪ್ರೌಢಶಾಲೆಗೆ ಕಡಿಮೆ ಇರಬಾರದು ಎಂಬ ದೂರದ್ರಷ್ಟಿಯನ್ನು ಇಟ್ಟುಕೊಂಡು ,ರೂಪುರೇಷೆಯನ್ನು ತಯಾರಿಸಿದ್ದರು.  
 
 



ಈ  ಶಾಲೆಯಲ್ಲಿ ಕಲಿಕೆಯೊಂದಿಗೆ, ಅನೇಕ ಪಠ್ಯೇತರ ಕಾರ್ಯಚಟುವಟಿಕೆಯಲ್ಲಿ ಮಕ್ಕಳನ್ನು ತೊಡಗಿಸಿಕ್ಕೊಂಡು, ತಾಲೂಕು , ಜಿಲ್ಲಾ, ರಾಜ್ಯ ಮಟ್ಟದ ಅನೇಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಲಲು ಪ್ರಾಧ್ಯಾಪಕರು ಮಾರ್ಗದರ್ಶನ ನೀಡುತ್ತಿದ್ದಾರೆ . ಈ  ಎಲ್ಲ ಪ್ರಯತ್ನ ಶಾಲೆಗೇ ೧೦ ತರಗತಿ ಪರೀಕ್ಷೆಯಲ್ಲಿ ೧೦೦% ಫಲಿತಾಂಶವೇನು  ಬರಲಿಲ್ಲ, ಯಾಂಕೆಂದರೆ ಇಲ್ಲಿಗೆ ಬರುವ ೯೦% ಮಕ್ಕಳ ತಂದೆ ತಾಯಿ ಅನಕ್ಷರಸ್ತರು ಅಥವಾ ಕಡಿಮೆ ವಿದ್ಯಾಭ್ಯಾಸ ಹೊಂದಿದವರು ಮತ್ತು ಮನೆಯ ವಾತಾವರಣ ಕೂಡ ಈ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ. ಖಾಸಗಿ ಶಾಲೆಯವರು ಉತ್ತಮ ಅಂಕ ಪಡೆಯುವ ಸಾಮರ್ಥ್ಯ ಇರುವ ಮಕ್ಕಳನ್ನು ಮಾತ್ರ ತಮ್ಮ ಶಾಲೆಗೆ ಸೇರಿಸಿಕೊಂಡು, ಮಕ್ಕಳು ಖಾಸಗಿ ಟ್ಯೂಷನ್ ಪಡೆದು ೧೦೦% ಫಲಿತಾಂಶ ಪಡೆಯುವುದು ಆಸಾದ್ಯವೇನಲ್ಲ. 

ಇನ್ನು ಪುನಃ ನಮ್ಮ ಸರಕಾರಿ ಶಾಲೆಯ ವಿಚಾರಕ್ಕೆ ಬರೋಣ, ಕಳೆದ ಕೆಲವು ವರ್ಷದಿಂದ ಇಲ್ಲಿ ವಿದ್ಯಾ ರ್ಥಿನಿಯರ ತರಗತಿಗೆ ಗೈರುಹಾಜರು ಸಂಖ್ಯೆ ಹೆಚ್ಚಾಗಿದೆ , ಕೆಲವು ವಿದ್ಯಾರ್ಥಿನಿಯರ  ಶಾಲೆಯನ್ನು ಕೂಡ ಬಿಟ್ಟರು. ಸ್ವಲ್ಪ ದಿನದಲ್ಲೇ ಶಿಕ್ಷಕರಿಗೆ ಇದರ ಮೂಲ ಕಾರಣ ಅರಿವಾಹಿತು. ವಿದ್ಯಾರ್ಥಿನಿಯರು ತಮ್ಮ ಮುಟ್ಟಿನ ಕಾಲಚಕ್ರದಲ್ಲಿ  ಶಾಲೆಯಲ್ಲಿ ಅನೇಕ ತೊಂದರೆ ಅನುಭವಿಸುತ್ತಿದರು. ಶಿಕ್ಷಕರು ಕೆಲವೊಮ್ಮೆ ಮಕ್ಕಳಿಗೆ ಮುಖ್ಯ ಪ್ರಾಧ್ಯಾಪಕರ ಕೊನೆಯಲ್ಲಿ ವಿಶ್ರಾಂತಿ ತೆಗೆಯಲು ಹೇಳುತ್ತಿದ್ದರೆ, ಕೆಲವು  ಸಲ ಅವರನ್ನು ರಿಕ್ಷಾದಲ್ಲಿ ಕೂರಿಸಿ ಮನೆಗೆ ಕಲಿಸಿಕೊಡುತ್ತಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ವ್ಯವಸ್ಥೆ ಇಲ್ಲದೆ ಇರುವುದರಿಂದ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಸ್ಯಾನಿಟರಿ ನಾಪ್ಕಿನ್ ಸುಡುವ ಎಲೆಕ್ಟ್ರಿಕ್ ಮಷೀನನ್ನು ವ್ಯವಸ್ಥೆಯನ್ನು ಪ್ರಾದ್ಯಾಪಕರು ಮಾಡಿದ್ದರು. ಆದರೆ ಇದು ವಿದ್ಯಾರ್ಥಿನಿಯರ ಗೈರುಹಾಜರಿ ಕಡಿಮೆ ಮಾಡಲು ಸಹಕರಿಸಲಿಲ್ಲ.

ಒಂದು ದಿವಸ ನನ್ನೊಂದಿಗೆ ಮುಖ್ಖ್ಯೋಪಾದ್ಯಾಯರು ಈ ವಿಷಯಯವನ್ನು ಪ್ರಸ್ತಾಪಿಸಿದರು. ಸಮಸ್ಯೆಯ ಗಂಭೀರತೆಯನ್ನು ಅರಿತು ನಾನು ನನ್ನ ಪರಿಚಯದ  ಅನೇಕರಲ್ಲಿ ಈ ವಿಷಯ ಪ್ರಸ್ತಾಪಿಸಿದೆ, ಆದರೆ ಎಲ್ಲೂ ಧನಾತ್ಮಕ ಉತ್ತರ ಸಿಗಲಿಲ್ಲ. ಆದರೆ ಈ ವಿಚಾರವನ್ನು ನನ್ನ ಗೆಳೆಯೆ ಜೀಶಾನ್ ರಮ್ಲಾನ್ ಬಳಿ ಈ ವಿಷಯ ಪ್ರಸ್ತಾವಿಸಿದಾಗ ಅವರು ತಕ್ಶಣ ತಮ್ಮ ರಮ್ಲಾನ್ ಟ್ರಸ್ಟಿನಿಂದ ಬೇಕಾದ ಸಹಾಯ ನೀಡುವ ಆಶ್ವಾಸನೆ ಕೊಟ್ಟು ಶಾಲೆಗೆ ಭೇಟಿ ನೀಡಿದರು . ಶಾಲೆಗೇ ಹೊಸತಾಗಿ ಸರಕಾರದ ಅನುದಾನದಿಂದ ಕಟ್ಟಿದ ಕಟ್ಟಡದಲ್ಲಿ ಒಂದು ಕೋಣೆಯನ್ನು " ಭಾವಿಕ" ಎಂಬ ಹೆಸರಿತ್ತು ವಿದ್ಯಾರ್ಥಿನಿಯರ ವಿಶ್ರಾಂತಿ  ಕೊಠಡಿಯಾಗಿ ಮಾರ್ಪಾಡು ಗೊಳಿಸಿದರು. ರಮ್ಲಾನ್ ಟ್ರಸ್ಟ್ ನ ಸಹಾಯದಿಂದ ಕೋಣೆಯೊಳಗೆ ಒಂದು ಶೌಚಾಲಯನ್ನು ನಿರ್ಮಾಣ ಮಾಡಿದರು. ಈ  ವಿಶ್ರಾಂತಿ ಕೊಠಡಿಯಲ್ಲಿ ಮಲಗಲು ಮಂಚ , ಸಣ್ಣ ಪುಸ್ತಕಾಲಯ, ಕುಡಿಯುವ  ನೀರು, ಪ್ರೇರಣಾತ್ಮಕ ಬರವಣಿಗೆಯೊಂದಿಗೆ ಅಚ್ಚುಕಟ್ಟಾಗಿ ಕೋಣೆಯನ್ನು ನಿರ್ಮಿಸಿ ೨ ಸೆಪ್ಟೆಂಬರ್,೨೦೧೭ಕ್ಕೆ ಉದ್ಘಾಟನೆಯಾಯಿತು.


  

 


 



ಇದು ಅನೇಕರಿಗೆ ದೊಡ್ಡ ಕ್ರಾಂತಿಕಾರಿ ಬದಲಾವಣೆಯಂತೆ ಕಾಣದೆ ಇರಹಬಹುದು, ಆದರೆ ನೀವು ನಿಮ್ಮೂರ/ ಹಳ್ಳಿಯ ಶಾಲೆಗೇ ಭೇಟಿ  ಕೊಟ್ಟರೆ ಅಲ್ಲೂ ಈ ಸಮಸ್ಯೆ ನೀವು ಗಮನಿಸ  ಬಹುದು. ಖಾಸಗಿ ಶಾಲೆಗಳಲ್ಲಿ ಇದೊಂದು ಮೂಲಭೂತ ಸೌಕರ್ಯ, ಆದರೆ ಇನ್ನೂ ಶೋಚಾಲಯವನ್ನೇ ಕಾಣದ ಅದೆಷ್ಟೋ ಶಾಲೆಗಳು ನಮ್ಮ ದೇಶದಲ್ಲಿ ಇರುವಾಗ, ನಮ್ಮ ರಾಜಕೀಯ ನಾಯಕರಿಗೆ, ಸಮಾಜಕ್ಕೆ ಇದೊಂದು ಸಮಸ್ಯೆಂದು ಗೋಚರಿಸದೆ ಇರಬಹುದು. ಈ  ಶಾಲೆಯ  ಪ್ರಾಧ್ಯಾಪಕ ಮಿತ್ರರು ಈ ಯೋಜನೆಯಿಂದ ಸಮಾಜದಲ್ಲಿ ನಿಜವಾಗಲೂ " ಭೇಟಿ ಪಡಾವೋ ಭೇಟಿ ಬಚಾವೋ" ಮಾತಿಗೆ ಉದಾಹರಣೆ ನೀಡಿದ್ದಾರೆ.  ಇದನ್ನು ನೋಡಿ ಇನ್ನೂ ಅನೇಕ ಸರಕಾರಿ ಶಾಲೆಗಳಲ್ಲಿ  ಇಂತ ಮೂಲಭೂತ ಸೌಕರ್ಯ ನಿರ್ಮಿಸುವಲ್ಲಿ " ರಮ್ಲಾನ್  ಟ್ರಸ್ಟ್" ನಂತ ಅನೇಕ ಸಂಸ್ಥೆಗಳು ಮುಂದೆ ಬಂದು, ಸಮಾಜದಲ್ಲಿ ಹೆಣ್ಣು ಮಕ್ಕಳು  ಮುಂದೆ ಬರಲು ಸಹಕಾರ ನೀಡುವ ಅಗತ್ಯ ಇದೆ. 
 
ಪಾವೂರು   ಪ್ರೌಢಶಾಲೆ ಅಧ್ಯಾಪಕರುಗಳು 
reference post  :
 

Sunday, August 27, 2017

ಜನ ಮನ - ನನ್ನ ಮೆಟ್ರೋ ಪಯಣ

 
ಮುಂಜಾನೆ ೮ ಘಂಟೆಗೆ ಬೆಂಗಳೂರು  ದರ್ಶನಕ್ಕೆ ಹೊರಟಾಗ ಕಾರ್/ ಬೈಕ್ನಲ್ಲಿ ಹೋಗದೆ ಸಾರ್ವಜನಿಕ ಬಸ್/ಮೆಟ್ರೋ ದಲ್ಲಿ ಟ್ರಾವೆಲ್ ಮಾಡುವುದೆಂದು ತೀರ್ಮಾನ ಮಾಡಿ ಮನೆಯಿಂದ ಹೊರಟೆ. ಖಾಲಿ ಬಸ್, ಖಾಲಿ ರೋಡ್, ಲೇಡಿ ಕಂಡಕ್ಟರ್ ಮತ್ತು ಮಾತುಗಾರ ಚಾಲಕನೊಂದಿಗೆ ನನ್ನ ಜನಮನ ಸವಾರಿ ಪ್ರಾರಂಭ.


 
 

30 ನಿಮಿಷದಲ್ಲಿ ಇಲೆಕ್ಟ್ರಾನಿಕ್ ಸಿಟಿಯಿಂದ MG ರೋಡ್ ಕಡೆಗೆ ಟ್ರಾಫಿಕ್ ಇಲ್ಲದೆ  ಸವಾರಿ ಮಾಡಿ ಮನಸ್ಸಿಗೆ ಬೋರ್ ಆಯಿತು, ಜನಜಂಗುಳಿ/ಹಾರ್ನ್ ಇಲ್ಲದೆ , 10 - 10 ನಿಮಿಷ ಸಿಗ್ನಲ್ಳಲ್ಲಿ ನಿಲ್ಲದೆ ಬೆಂಗಳೂರಲ್ಲಿ ಬಸ್ಸು  ಪ್ರಯಾಣ ವಿಲರಾಳವೇ ಸರಿ. ನಿರ್ಧರಿಸಿದಂತೆ MG ರೋಡ್ ನಿಂದ ಭೈರಪ್ಪನ ಹಳ್ಳಿ ಕಡೆಗೆ ಪ್ರಯಾಣ ಮಾಡಿ, ಜನಮನ ಅರಿವು  ಮಾಡಿಸಿಕುಂಡು, ಮತ್ತೆ ಪುನಃ ಮೈಸೂರ್ ರೋಡ್ ಕಡೆ ಪ್ರಯಾಣ ಮಾಡಿ ರೆಡ್ ಲೈನ್ ಮೆಟ್ರೋ ಸವಾರಿ ಮುಗಿಸಿದೆ . ಅನೇಕರೊಂದಿಗೆ ಬೇರೆ ಬೇರೆ ವಿಷ್ಯದ  ಬಗ್ಗೆ ಚರ್ಚೆ , ತಿಳುವಳಿಕೆ ಪಡೆದು, ಪಯಣ  ಮುಂದುವರಿಸುತ್ತಾ ನಾಡ ಪ್ರಭು ಕೆಂಪೇ ಗೌಡ ಸ್ಟೇಷನನ್ನು  ತಲುಪಿ , Perple ಮೆಟ್ರೋ ಲೈನ್ ಕನೆಕ್ಟ್ ಮಾಡಿದೆ .ಇನ್ನೂ  ಜನರನ್ನು ಭೇಟಿ ಮಾಡುವ ತವಕದಲ್ಲಿ ಚಿಕ್ಪೇಟೆ ಮೆಟ್ರೋ ಸ್ಟೇಷನಲ್ಲಿ ಇಳಿದು ಊರಿಡೀ ಸುತ್ತಾಡಿದೆ


 


 

ಊರಿಡೀ ಟ್ರಾಫಿಕ್ ಇಲ್ಲದಿದ್ರೂ, ಚಿಕ್ಪೇಟೆಯಲ್ಲಿ ಕಾಲಿಡಲು ಜಾಗವಿಲ್ಲ, ಮನೆಯ ಸಾಮಗ್ರಿಗಳು,ಕಳ್ಳ ಮಾಲುಗಳು, ಸುಳ್ಳುಮಾಲುಗಳು( ಕಾಪಿ ಅಂಡ್ ಡೂಪ್ಲಿಕೇಟ್  ಪ್ರಾಡಕ್ಟ್ಸ್), ಸೆಕೆಂಡ್ ಹ್ಯಾಂಡ್ ಪ್ರಾಡಕ್ಟ್ಸ್, ಸೀರೆಗಳು, ಆಭರಣಗಳು , ಅದರೊಂದಿಗೆ ಗಣಪತಿ ವಿಸರ್ಜನೆಯ ಕಾರ್ಯಕ್ರಮಗಳು. ರಸ್ತೆಯೆಲ್ಲಿದೆ, ಕೊಂಪೆಯೆಲ್ಲಿದೆಯೆಂದು ಹುಡುಕಾಡುವ ವಾಹನದಾರರು, ರಸ್ತೆ ಬದಿಯಲ್ಲಿ ವೆಹಿಕಲ್ ಪಾರ್ಕ್ ಮಾಡಿರುವ ಆರಕ್ಷಕರು, ಎಲ್ಲೆಂದಲ್ಲಿ ಒರಿಜಿನಲ್ ಸ್ಯಾಮ್ಸಂಗ್  ಪವರ್ ಬ್ಯಾಂಕ್ ಮತ್ತು ಫಾಸ್ಟ್ರಾಕ್ ವಾಚ್ಗೆ ಮಾರುತ್ತಿರುವ ಹೆಣ್ಮಕ್ಕಳಲ್ಲಿ ಚರ್ಚೆ ಮಾಡುತ್ತಿರುವ ಗಂಡು  ಹುಡುಗರು, ಗಣಪತಿ ಹೆಸರಲ್ಲಿ ಅನ್ನದಾನ ಹೆಸರಲ್ಲಿ ಅನ್ನ ಪೋಲು ಮಾಡುತ್ತಿರುವ ಭಕ್ತರು, ಪಾರ್ಕಿಂಗ್ ಜಾಗ ಹುಡುಕಾಡುವ ಜೋಡಿ ಹಕ್ಕಿಗಳು etc
 

  

 ಪ್ರಯಾಣ ಮುಂದುವರಿಸಿ ಎಚ್ಚೆಯೇನೆಯಲ್ಲಿ ಕಡೆಯಿಂದ ನಾಗಸಂದ್ರದವರೆಗೆ ಪಯಣ. ನಡುವಲ್ಲಿ ತುಂಬಾ ಜನರೊಂದಿಗೆ ಸಂವಾದ/ ಚರ್ಚೆ. ದಾಸರಲ್ಲಿ ತಲುಪಿದಾಗ ಎಲ್ಲೋ ಮಾತೃ ಭಾಷೆ ಮಾತು ಕೇಳಿದಂತಾಯಿತು . ಮಂಗಳೂರಿನ ಎರಡು ಕುಟುಂಬದವರು ನನ್ನ ಪಕ್ಕದಲ್ಲೇ  ಕುಳಿತು  ತುಳುವಿನಲ್ಲಿ ಮಾತಾಡುವುದನ್ನು ಕೇಳಿ ಕಿವಿ ಇಂಪಾಯಿತು. ಪ್ರಯಾಣದಲ್ಲಿ ಮುದ್ದು ಮಗುವೊಂದು ಅಪ್ಪನಲ್ಲಿ ಕೇಳುತ್ತಿತ್ತು " ಬೆಂಗಳೂರಲ್ಲಿ ೧೦೦೦ ಮನೆ ಇರಬಹುವುದೇ? ಪಕ್ಷಿಗಳು ಮೋಡ ಮುಟ್ಟುತವೆಯಾ? ನನಗೆ ಯಾಕೆ ಹಾರಡಲು ಸಾಧ್ಯವಿಲ್ಲಾ ? etc, ತುಂಬಾ ಕುತೂಹಲಕಾರಿಯಾದ ಈ  ಮಾತುಗಾರಿಕೆ , ನಾನು ಲಾಲ್ಭಾಗ್ ಸ್ಟೇಷನಲ್ಲಿ ಇಳಿದಾಗ ಕೇವಲ ನೆನಪಿನಂಚಿನಲ್ಲಿ ಕಳೆದು ಹೋಹಿತು. 

  

                                         
 
 
 ಲಾಲ್ ಬಾಗ್ ಬೆಂಗಳೂರಿನ ಉಳಿದ ಕೆಲವೊಂದು ಸಸ್ಯಕಾಶಿಗಳಲ್ಲಿ ಒಂದು . ಮಳೆರಾಯ ಜೋರಾಗಿ ನನ್ನನ್ನು ಸ್ವಾಗತ ಮಾಡಿತು. ಗಣಪತಿಯನ್ನು ನೀರಲ್ಲಿ ವಿಸರ್ಜನೆ ಮಾಡಿ ಶುದ್ಧಿಯಿರುವ ಕೆರೆಯನ್ನು ಇನ್ನಷ್ಟು ಶುದ್ದಿಸಲು ಹೋರಾಟ ಅದೇಷ್ಟೋ ಭಕ್ತರು, ವಾರಾಂತ್ಯ ಸಮಯ ಕಳೆಯಲು ಬಂದಿರುವ ಅದೆಷ್ಟೋ ಕುಟುಂಬಗಳು, ಮೂಲೆ ಮೂಲೆಯನ್ನು ಹುಡುಕುತ್ತಿರುವ ಯುವ ಜೋಡಿಗಳು, ಇಂದಿಗೂ ವಿದೇಶಿಯರನ್ನು ನೋಡಿ  ಅಚ್ಚರಿ ಪಡುವ ಬಾರತೀಯರು, ಅದರಲ್ಲೂ ಸೆಲ್ಫಿ ವಿಥ್ ಫಾರಿನರ್ಸ್ ಅಂತೂ ವಿಶೇಷ ಕಂಡಿತು, ಪಕ್ಷಿಗಳ ಕಲರವ, ಪ್ರಾಣಿಗಳ ಆಕೃತಿಯ ಗಿಡಗಳು ಮನಮೋಹಿಸಿತು. 
 
                                       
 
 

ಮೆಟ್ರೋ  ಪ್ರಯಾಣದುದ್ದಕ್ಕೂ ನಾನು ಎಲ್ಲರನ್ನು ಗಮನಿಸುತ್ತಿದೆ -  ear ಫೋನ್ ಆಕಿಕೊಂಡು ಬ್ಯುಸಿ ಆಗಿರುವ ಲಲನೆಯರು, ಆಯಾಸತಿಂದ ನಿದ್ರೆ ಮಾಡುವ ಗಂಡು ಹುಡುಗರು, ಪಿಕ್ನಿಕ್ ಸ್ಪಾಟ್ ತರ ಕುಟುಂಬಗಳ ಮೆಟ್ರೋ ಪ್ರಯಾಣ, ಮಕ್ಕಳ ಓಡಾಟ / ಕಿರುಚಾಟ , ಜೋಡಿ ಹಕ್ಕಿಗಳ ತುಂಟಾಟ, ಹಿರಿ ವಯಸ್ಸಿಗರ ಚರ್ಚೆಗಳು, ಮಯಿಳಾ ಮಣಿಗಳ ಸೀರೆ/ ಬಂಗಾರದ ಮಾತುಗಳು ತುಂಬಾ ಸ್ವಾರಸ್ಯಕರವಾಗಿತ್ತು. ಇದೆಲ್ಲದೊರೊಂದಿಗೆ ಯಾವ ರೀತಿ ಮೆಟ್ರೋದ ಸೆಕ್ಯೂರಿಟಿ ಕೆಲಸ ಮಾಡುವ ಕಾರ್ಮಿಕರಿಗೆ ಅವರ ಕಂಟ್ರಾಕ್ಟರ್ ಯಾವ  ರೀತಿ  ಹಕ್ಕಿನ  ವಾರದ  ರಜೆ ನೀಡದೆ, ಗಳಿಕೆ  ರಜೆಯನ್ನು ಮರೀಚಿಕೆ ಮಾಡಿ, OT ಮಾಡಿಯೂ ಸರಿಯಾದ ಓಟ್ ಸಂಬಳ ಕೊಡದೇ ಪೀಡನೆ ಕೊಡುತ್ತಿದ್ದಾರೆ ಎನ್ನುವ ವಿಚಾರ ಕೂಡ  ತಿಳಿಯಿತು

ಜನ ಮನದ  ಸುದ್ದಿ  ಸಮಾಚಾರಗಳು:
    • ಜನಸಾಮನ್ಯನ ಪ್ರಕಾರ ಇಂದಿರಾ ಕ್ಯಾಂಟೀನ್ಗಳು ಕೇವಲ ರಾಜಕೀಯ ಬೇಯಿಸಲು ಮಾಡಿರುವ ಕಾರ್ಯಕ್ರಮ. ತಿಂಡಿ ತಿನಿಸು ಗುಣಮಟ್ಟ ತುಂಬಾ ಕಳಪೆಯಾಗಿದೆ ಮತ್ತು  ಇದು 200 ಜನಕ್ಕೆ ಕೂಡ ಸಿಗಲ್ಲ....
    • ಸ್ವಚ್ಛ ಭಾರತ ಬಗ್ಗೆ  ಅರಿವು ಇದ್ದರು, ಸಾರ್ವಜನಿಕ ಸ್ಥಾನದಲ್ಲಿ ಕೆಲವೊಮ್ಮೆ ಧ್ಯಾನ ಕೊಡುವುದಿಲ್ಲ
    • ರಾಜ್ಯ  ಸರ್ಕಾರದ  ಯಾವುದೇ ಭಾಗ್ಯ ಯೋಜನೆಗಳ  ಬಗ್ಗೆ ಜನರಿಗೆ ಅರಿವೇ ಇಲ್ಲ.
    • ಮೆಟ್ರೋ ಚಾಲನೆ ಎಲ್ಲಾ ವರ್ಗದ ಜನರಿಂದ ಪ್ರಶಂಸೆ ಪಡಯುತಿದೆ, ಕೇವಲ ಒಂದು ಕೋರಿಕೆ ಎಂದರೆ ಫೀಡರ್ ಬಸ್  ವ್ಯವಸ್ಥೆಯನ್ನು ಇನ್ನೂ ಎಚ್ಚಿನ ಸ್ಥಳಕ್ಕೆ ಒದಗಿಸಬೇಕೆಂದು. 
    • ಬಿಬಿಎಂಪಿ ಪ್ರಕಾರ ಪ್ರತಿ  ಕಿಲೋ ಮೀಟರ್ ಗೇ ಎರಡು ಹೊಂಡ ಇದೆ ಅಂತೇ, ಜನ  ಸಾಮಾನ್ಯನ  ಪ್ರಕಾರ ರಸ್ತೆಯಲ್ಲ ಕೇವಲ ಹೊಂಡಮಯ
    • ಬಿಬಿಎಂಪಿ ಅಧಿಕಾರಿಗಳು ಪ್ರಕರ್ತಿ ದುರ್ಗಟನೆ ನಿಭಾಯಿಸಲು ದಕ್ಷರಲ್ಲ
    • ಮುಂದಿನ ಚುನಾವಣೆಯನ್ನು ಯಾವ ಪಕ್ಷ ಕೂಡ ಗೆಲ್ಲ ಬಹುದು. ಉಪೇಂದ್ರರ ರಾಜಾಕೀಯ ಪಕ್ಷದಬಗ್ಗೆ ಅರಿವೇ ಇಲ್ಲ. 

          ಜನರೊಂದಿಗಿನ ಒಡನಾಟ, ಪದೇ  ಪದೇ ಬರುರುತಿದ್ದ ತುಂತುರು ಮಳೆ, ಸರ್ವಾಜನಿಕ ವಾಹನದಲ್ಲಿನ  ಪ್ರಯಾಣ, ರಸ್ತೆ ಬದಿಯ  ತಿಂಡಿ ತಿನಿಸುಗಳು, ಹೊಂಡಮಯ ರಸ್ತೆಗಳು etc etc ಈ ಜನಮನದ ಪ್ರಯಾಣವನ್ನು ಮರೆಯಲಾಗದಂತೆ ಮಾಡಿತು. 
          
 
 


 


 

Monday, March 2, 2015

VVIP ಸಂಸ್ಕೃತಿ ?


ಒಂದಾನೊಂದು ಕಾಲದಲ್ಲಿ ಭಾರತವೆಂಬ ರಾಜ್ಯದಲ್ಲಿ ರಾಜರು, ರಾಣಿಯರು, ಮಂತ್ರಿಗಳು ಅಂದಿನ ದಿನದ VVIP ಗಳು, ಇಂದು ಮುಖ್ಯ ಮಂತ್ರಿಗಳು , ಮಂತ್ರಿಗಳು , ಶಾಸಕರು ಅವರ ಸ್ಥಾನವನ್ನು ಪದೆದ್ದಿದರೆಯೇ ? ಭಾರತವೊಂದು ಪ್ರಜಾಪ್ರಭುತ್ವ ದೇಶ, ಆದರೆ   VVIP ಗೆ ಬೇರೆ ಸ್ಥಾನಮಾನ , ಸಾಮಾನ್ಯ ಜನರಿಗೆ ಬೇರೆ ರೀತಿಯದೇ? ನಮ್ಮ ಸಂವಿಧಾನದಲ್ಲಿ ಎಲ್ಲ್ಲೂ ಇದರ ಬಗ್ಗೆ ಉಲ್ಲೇಕ ಮಾಡಿಲ್ಲ, ಉನ್ನತ ನ್ಯಾಯಾಲಯ ಯಾವುದೇ ತೀರ್ಪು ಕೊಟ್ಟಿಲ್ಲ, ಮತ್ತೆ ಈ ರಾಜಕೀಯ ವ್ಯಕ್ತಿಗಳಿಗೆ, ಚಲನಚಿತ್ರ ನಟ ನಟಿಯರಿಗೆ,ಶ್ರೀಮಂತರಿಗೆ  ಏಕೆ ಈ VVIP ಧೋರಣೆ?
 
ನಾನು ನಾನು ಒಂದು ದಿನ ಮುಂಬೈಯ ವಿಮಾನ ನಿಲ್ದಾಣದಲ್ಲಿ ತಂಗಿದ್ದಾಗ, ಆಡಳಿತ ಪಕ್ಷದ ಉನ್ನತ ನಾಯಕರೊಬ್ಬರನ್ನು ನೋಡಿದೆ, ಅವರ ಅಕ್ಕ ಪಕ್ಕ ೪ ಜನ , ಒಬ್ಬರುಬ್ಯಾಗ್ ಹಿಡಿದುಕೊಳ್ಳಲು, ಒಬ್ಬರು ಟಿಕೆಟ್ ಹಿಡಿದುಕೊಂಡು ಓಡುತಿದ್ದನು, ಇನ್ನಿಬರು ಅಥಿತಿ ಸತ್ಕಾರ ಮಾಡುತಿದ್ದರು. ಇನ್ನೊಂದು ಸನ್ನಿವೇಶದಲ್ಲಿ ಕನ್ನಡದ ಪ್ರಖ್ಯಾತ ನಟ ನಟಿಯರಿಬ್ಬರು  ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಒಳಗೆ ಬಂದ ಕೂಡಲೇ ಅವರಿಗೆ ವಿಶೇಷ ಅಥಿತಿ ಸತ್ಕಾರ ಮೂಲಕ ಯಾವುದೇ ಸಾಮಾನ್ಯ ಜನರ ರೀತಿಯ ಕಾರ್ಯ ಮಾಡದೇ, ನೆರವಾಗಿ ಬಧ್ರತೆ ಸಿಬ್ಬಂದಿಯತ್ರ ತಲುಪಿಸುತ್ತಾರೆ. ಇಂತ ಅನೇಕ ಸನ್ನಿವೇಶಗಳು ನಾವು ನಮ್ಮ ಜನ ಜೀವನದಲ್ಲಿ ನೋಡುತ್ತ ಬಂದಿದ್ದೇವೆ.
 
VVIP ಸಂಸ್ಕ್ರತಿಯ ಈ ಕೆಂಪು ದೀಪದ ಕಾರುಗಳು, ವಿಶೇಷ ರೀತಿಯ ದೇವಸ್ಥಾನದ ಭೇಟಿ,ಜನ ಸಾಮಾನ್ಯನಿಗೆ ಸಿಗದ ಝೆಡ್ ರೀತಿಯ ಬದ್ರತ ವ್ಯವಸ್ತೆ ಈ VVIP ಗೆ ಯಾಕೆ? ಯಾವಾಗ ನಮ್ಮ ರಾಜಕೀಯ ವ್ಯಕ್ತಿಗಳು ತಮ್ಮ ಮತ್ತು ಸಾಮಾನ್ಯ ಜನರ ನಡುವಿನ ಅಂತರ ಕಡಿಮೆ ಮಾಡಲು ಪ್ರಯತ್ನ ಮಾಡುತಿದ್ದಾರೆಯೇ ? 

ಇದಕಿಂತಲೂ ಕೀಳು ಮಟ್ಟದ VVP ಪದ್ದತಿಯೆಂದರೆ ಈ ರಾಜಕೀಯ ವ್ಯಕ್ತಿಗಲಿಗೊಸ್ಕರ ಸುರಕ್ಷತೆ ಹೆಸರಲ್ಲಿ ರಸ್ತೆ ತಡೆ ಮಾಡಿ ಅವರು ಸುಲಬ ರೀತಿಯಲ್ಲಿ ರಸ್ತೆಯಲ್ಲಿ ಹೋಗಲು ಅನುವು ಮಾಡಿಕೊಡುವುದು. ಕೆಂಪು ದೀಪವನ್ನು  ಒಬ್ಬ ಪಂಚಾಯತ್ ಅದ್ಧ್ಯಕ್ಷನಿಂದ ದೇಶದ ಪ್ರಧಾನ ಮಂತ್ರಿವರೆಗೂ ಉಪಯೋಗಿಸುತ್ತಾರೆ, ಆಂಬುಲೆನ್ಸ್ , ಪೋಲಿಸ್ ಎಲ್ಲರು ಅಳವಡಿಸಿ, ಅದರ ನಿಜವಾದ ಅರ್ಥ ಮರೆಯುವಂತೆ ಮಾಡಿದ್ದರೆ
 
A P J ಕಲಾಮ್ ನಂತಹ ಮಹನೀಯರು ಈ ಬಾರತದಲ್ಲಿ , ಇಂದಿನ ರಾಜಕೀಯ ವ್ಯಕ್ತಿಗಳಿಗೆ ಸಡ್ಡು ಹೊಡೆಯುವಂತೆ ಸಾಮಾನ್ಯ ಪ್ರಜೆಯಾಗಿ ಎಲ್ಲರೊಂದಿಗೆ ಬೆರೆತು ತೋರಿಸಿ ಕೊಟ್ಟಿದಾರೆ. ಆದರೆ ನಮ್ಮ ರಾಜಕೀಯ ಪುಡಾರಿಗಳಿಗೆ VVIP ಸಂಸ್ಕ್ರಥಿಯೇ ಪ್ರಿಯ, ಅಲ್ಲೊಮ್ಮೆ ಇಲ್ಲೊಮ್ಮೆ ನಮ್ಮ ಮಾದ್ಯಮಗಳು ಈ ವಿಚಾರ ಸುದ್ದಿ ಬಿಸ್ತಾರ ಮಾಡಿ ರಾಜಕೀಯ ವ್ಯಕ್ತಿಗಳನ್ನು ಪ್ರಶ್ನಿಸುತ್ತಾರೆ, ಅದಾರೆ ಇದರ ಬಗ್ಗೆ ಉನ್ನತ ನ್ಯಾಯಾಲಯ ರಾಜಕೀಯ ಪುಡಾರಿಗಳಿಗೆ ಛೀಮಾರಿ ಹಾಕಿ , ಈ VVIP ಸಂಸ್ಕ್ರತಿ ಭಾರತದಲ್ಲಿ ಕೊನೆಗಾನಲಿ.
 
ಡೆಲ್ಲಿ ರಾಜ್ಯದಲ್ಲಿ ಜನ ಸಾಮಾನ್ಯ ತನ್ನ ಮತದ ಮಹತ್ವವನ್ನು ಎಲ್ಲ ರಾಜಕೀಯ ಪಕ್ಷಗಳಿಗೆ ತೋರಿಸಿಕೊಟ್ಟಿದೆ, ಮೊದ್ದೊಂದು ದಿನ ಪ್ರಗಥಿಪಥದಲ್ಲಿರುವ ಭಾರತ ದೇಶದ ಜನ ಸಮಾನ್ಯ ಈ VVIP ಬಗ್ಗೆ ಸಿಡಿದೇಳುತ್ತಾನೆ.ನಾವೆಲ್ಲ ಸೇರಿ ಈ VVIP ಸಂಸ್ಕೃತಿಯನ್ನು ವಿರೋದಿಸೋನ.